Wednesday, February 10, 2010

ಕನಸಿನಿಂದ ಭವಿಷ್ಯ ಕಟ್ಟಿ


ಕನಸುಗಳಿಗೇನು? ರಾತ್ರಿಯ ನಿಶ್ಚಿಂತ ನಿದ್ರೆಯನ್ನು ಹಾಳುಗೆಡಹುವ ಭೂತಗಳವು ಎನ್ನುತ್ತಿದ್ದಳು ಗೆಳತಿಯೊಬ್ಬಳು. ಆದರೆ ನನಗೆ ಅದೊಂದು ಪ್ರಿಯತಮನಂತೆ, ಗೆಳೆಯನಂತೆ, ತನು ಮನ ಎಲ್ಲವೂ ಅದೇ. ಕನಸು ಇಂದು ಕಂಡು ನಾಳೆ ಮರೆಯಾಗುವ ಮರೀಚಿಕೆಯಲ್ಲ. ಭಾವಗಳ ಸಮ್ಮಳಿತವೇ ಕನಸು.

ಪ್ರತಿಯೊಬ್ಬನೂ ತನ್ನ ಗುರಿಯನ್ನು ನಿರ್ಧರಿಸಿಕೊಳ್ಳುವುದು ಕನಸುಗಳಿಂದಲೇ... ಕನಸಿಲ್ಲದೆ ಧ್ಯೇಯ ಗುರಿಗಳಿಲ್ಲ. ಅಬ್ದುಲ್ ಕಲಾಂ ಹೇಳಿರುವಂತೆ ಮನುಷ್ಯನಾದವ ಜೀವನದಲ್ಲಿ ಒಮ್ಮೆಯಾದರೂ ಕನಸು ಕಾಣಲೇಬೇಕು. ಅದರ ಸಫಲತೆಯತ್ತ ದಾಪುಗಾಲಿಡಬೇಕು.

ಮನಶ್ಯಾಸ್ತ್ರದ ಹಿನ್ನೆಲೆಯಲ್ಲಿ ಹೇಳುವುದಾದರೆ ಕನಸುಗಳು ವ್ಯಕ್ತಿಯ ಒತ್ತಡವನ್ನು ಕಡಿಮೆಗೊಳಿಸುತ್ತವೆ ಅಲ್ಲದೆ ಸುಪ್ತಮನಸ್ಸಿನ ಬಯಕೆಗಳು ಕನಸಾಗಿ ಕಾಡಿ ಚಿಂತೆಯನ್ನು ದೂರಗೊಳಿಸುತ್ತದೆ. ಅದೇನೇ ಇರಲಿ, ಕನಸು ಗುರಿ ಇಲ್ಲದವನ ಬಾಳು ಹುಟ್ಟು ಇಲ್ಲದ ದೋಣಿಯಂತೆ, ಆದ್ದರಿಂದ ಕನಸು ಕಾಣಿ ಸುಂದರ ಬಾಳು ನಿಮ್ಮದಾಗಿಸಿಕೊಳ್ಳಿ.

No comments:

Post a Comment