Wednesday, February 24, 2010

ಬೈಹುಲ್ಲ ಕುಠಾರಿ


ಗದ್ದೆಯಲ್ಲಿ ಪೈರು ಬೆಳೆದ ನಂತರ ಅದರ ತೆನೆಯನ್ನು ಕೊಯ್ದು ಭತ್ತವನ್ನು ಆರಿಸಿ ಉಳಿದ ಹುಲ್ಲನ್ನು ಒಣಗಿಸಿ ದನಗಳಿಗೆ ಆಹಾರವಾಗಿ ಹಾಕಲಾಗುತ್ತದೆ. ಒಣಗಿದ ಹುಲ್ಲನ್ನು ಮಳೆಗಾಲದಲ್ಲಿ ಸಂಗ್ರಹಿಸಿಡುವುದು ಬಹಳ ಕಷ್ಟ. ಅದಕ್ಕೆಂದೇ ಈ ಕುಠಾರಿಯನ್ನು ತಯಾರಿಸಲಾಗುತ್ತದೆ. ಇದರ ವೈಶಿಷ್ಟವೆಂದರೆ ಮಳೆಗಾಲದಲ್ಲಿ ಎಷ್ಟು ಮಳೆಸುರಿದರು ಮೇಲ್ಭಾಗದ ಒಂದಿಷ್ಟು ಹುಲ್ಲು ಒದ್ದೆಯಾಗುವುದೇ ಹೊರತು ಒಳಗಿನ ಹುಲ್ಲು ಸದಾ ಬೆಚ್ಚಗಿರುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಇದೇ ಕ್ರಮದಲ್ಲಿ ಒಣಹುಲ್ಲನ್ನು ಸಂಗ್ರಹಿಸಿಡಲಾಗುತ್ತದೆ.

No comments:

Post a Comment